ಜಗಳೂರು ತಾಲ್ಲೂಕು ಪಂಚಾಯಿತಿ ಆಡಳಿತ ಸಂಪೂರ್ಣ ಕುಸಿತವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ ತಾಪಂ ಇಓ ಕೆಂಚಪ್ಪ ರವರು ತಾಲ್ಲೂಕು ಪಂಚಾಯತಿ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದಾರೆ . ತಾಲ್ಲೂಕಿನ ವಿವಿಧ ಗ್ರಾಪಂ ಪಿಡಿಓ ಗಳು ಇಸ್ವತ್ತು ಮಾಡಿಸಲು ಹಣದಂಧೆಗೆ ನಿಂತಿದ್ದಾರೆ.
.ಉದಾಹರಣೆಗೆ ಮೊನ್ನೆ ಶಶಿಧರ್ ಪಾಟೇಲ್ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಪಾಟೇಲ್ ಕೋಟಿ ಕೋಟಿ ಭ್ರಷ್ಟಚಾರ ಆರೋಪದ ಮೇಲೆ ಈಗಾಗಲೇ ಸುಮಾರು ಬಾರಿ ಅಮಾನತ್ತುಗೊಂಡು ಇದೀಗ ಇಸ್ವತ್ತು ಮಾಡಿಸಲು ಲಂಚಕ್ಕೆ ಬೇಡಿಕೆಯಿಟ್ಟು 10 ಸಾವಿರ ಫಲಾನುಭವಿ ಲಂಚ ಕೊಡುವ ವೇಳೆ ಟ್ರ್ಯಾಪ್ ಮಾಡಿ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಲೆ ಬೀಸಿದ್ದಾರೆ.
ಇಂತ ಅನೇಕ ಉದಾಹರಣೆಗಳು ಜಗಳೂರು ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿ ಪಿಡಿಓ ಗಳು ಇದೆ ರೀತಿ ಲೋಕಾಯುಕ್ತಾ ಬಲೆಗೆ ಬಿದ್ದಿರುವ ಸಾಲು ಸಾಲು ಪ್ರಕರಣಗಳಿವೆ ಇನ್ನು ಇಲ್ಲಿ ಅಧಿಕಾರ ನಡೆಸುತ್ತಿರುವ ತಾಪಂ ಇಓ ಕೆಂಚಪ್ಪರವರು ಪಿಡಿಓ ಗಳನ್ನ ಹಾಗೂ ಕಾರ್ಯದರ್ಶಿಗಳನ್ನ ಪ್ರಭಾರ ವರ್ಗವಣೆಗಳು ಮಾಡಲು 50 ಸಾವಿರ ಹಣ ನೀಡಿದರೆ ವರ್ಗಾವಣೆ ಸಲೀಸು ಎಂಬುದು ಸರ್ವೇಸಾಮಾನ್ಯವಾಗಿದೆ..ಲಂಚ ನೀಡಿದರೆ ಸಾಕು ಅವರ ಅವರ ಮೂಲ ಅಧಿಕಾರ ಸ್ಥಾನದಿಂದ ಬೇರಡೆಗೆ ಸಲೀಸಾಗಿ ಪಿಡಿಓ ಹಾಗೂ ಕಾರ್ಯದರ್ಶಿ ಮತ್ತು ವಿವಿಧ ಸಿಬ್ಬಂದಿಗಳನ್ನ ಡೆಪ್ಯುಟೇಶನ್ ಮೂಲಕ ಯಾವ ಮಾನದಂಡವಿಲ್ಲದೆ ವರ್ಗಾಯಿಸುವರು ಎಂಬ ಆರೋಪಗಳು ಕೇಳಿ ಬಂದಿವೆ .ಈ ಸಂಬಂಧವಾಗಿ ಇಓ ಕೆಂಚಪ್ಪರವರನ್ನ ಪ್ರಶ್ನೇಸಿದರೆ ಉಡಾಪೆ ಉತ್ತರ ನೀಡುವರು ಪಿಡಿಓ ಗಳು ಸರಿಯಾದ ರೀತಿ ಕಾರ್ಯನಿರ್ವಹಿಸುತ್ತಲ್ಲ ಗ್ರಾಮೀಣ ಬಾಗದಲ್ಲಿ ರಸ್ತೆ ಚರಂಡಿ ಕೆಲ ಬಾಗಗಳಲ್ಲಿ ಅನೇಕ ಸಮಸ್ಯೆಗಳಿವೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ.ಗ್ರಾಮೀಣ ಬಾಗದಲ್ಲಿ ರಸ್ತೆಗಳು ಹಾಳಾಗಿವೆ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಇದರ ಬಗ್ಗೆ ಪ್ರಶ್ನೇಸಿದರೆ ಉಡಾಪೆ ಉತ್ತರ ಕೋಡುತ್ತಾರೆ ಎಂದು ಆರೋಪುಸಿದ್ದಾರೆ.
ಒಟ್ಟಾರೆ ಇಓ ಕೆಂಚಪ್ಪ ರವರ ಆಡಳಿತ ಕುಸಿತವಾಗಿದೆ ಆದ್ದರಿಂದ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ..

