19 ವರ್ಷದೊಳಗಿನ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾದ ವಿದ್ಯಾರ್ಥಿ ತರುಣ್ ಗೆ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪರವರು ಸಿಹಿ ತಿನ್ನಿಸಿ ಸನ್ಮಾನಿಸಿ ಗೌರವಿಸಿದರು .
ಸುದ್ದಿ ಜಗಳೂರು
ಜಗಳೂರು ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿ ಜೆ.ಸಿ.ಬಿ.ರಾಜುರವರ ಪುತ್ರ ತರುಣ್ ಎಂಬ ವಿದ್ಯಾರ್ಥಿ ಇದೆ ಡಿಸೆಂಬರ್ 18 ರಿಂದ 21 ರವರೆಗೆ ಆಗ್ರಾದಲ್ಲಿ ನಡೆಯುವ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಂಪಿನ್ ಶಿಪ್ ಕರ್ನಾಟಕ ರಾಜ್ಯದಿಂದ ಭಾಗವಹಿಸಲಿದ್ದಾರೆ. ಭಾರತ ಸೇವಾ ಕ್ರೀಡಾ ಇಲಾಖೆಯಿಂದ ತರಬೇತಿ ಪಡೆದು ಎರಡನೇ ಬಾರಿಯಾಗಿ ಟೆನ್ನಿಸ್ ಬಾಲ್ ಪಂದ್ಯವಳಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗೆ ಪೋಷಕರು .ಶಾಲಾ ಶಿಕ್ಷಕರು ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪ ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎ ಎಲ್ ತಿಪ್ಪೇಸ್ವಾಮಿ.ಕಾಂಗ್ರೇಸ್ ಮುಖಂಡ ಮಂಜುನಾಥ. ಶ್ರೀನಿವಾಸ.ಕಲ್ಲೇದೇವರಪುರ ತಿಪ್ಪೇಸ್ವಾಮಿ.ಮುಖಂಡರಾದ ಮರೇನಹಳ್ಳಿ ಶೇಖರಣ್ಣ.ಶಾಸಕರ ಆಪ್ತ ಸಹಾಯಕ ಮಧು ಸೇರಿದಂತೆ ಹಾಜುರಿದ್ದರು.
