ಜಗಳೂರು ಬ್ರೇಕಿಂಗ್ ನ್ಯೂಸ್
ಹಸಿದವರಿಗೆ ಅನ್ನ ನೀಡುವ ಕಾರ್ಯ ಮಹಾತ್ಕಾರ್ಯದ ಕೆಲಸ. ಬರ್ಕತ್ ಆಲಿಯವರು ಅತಿ ಶೀಘ್ರದಲ್ಲಿಯೇ ರಾಜಕೀಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡಲಿ ನಟ ಪ್ರೇಮಾ ಆಶಿಸಿದರು.
ಜಗಳೂರು ನಗರದಲ್ಲಿ ಬರ್ಕತ ಆಲಿಯವರ ನೂತನ ಕೆ ಎ 17 ಹೊಟೇಲ್ ಪ್ರಾರಂಭತ್ಸೊವಕ್ಕೆ ಆಗಮಿಸಿದ ಚಿತ್ರನಟ ಪ್ರೇಮಾರವರು ನೂತನ ಹೊಟೆಲ್ ಪ್ರಾರಂಭತ್ಸೋವದಲ್ಲಿ ಟೇಪು ಕತ್ತರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಶ್ಲಾಘನೀಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ಮಾಲಿಕರಾದ ಬರ್ಕತ್ ಆಲಿ ಸಮಾಜ ಮುಖಿ ಕೆಲಸ ಮಾಡುವ ಮೂಲಕ ಜನಮನ್ನಣೆಗೆ ಸಾಕ್ಷಿಯಾಗಿದ್ದಾರೆ.ಜೈಭಾರತ್ ಟ್ರಸ್ಟ್ ಮೂಲಕ ಆರೋಗ್ಯ ಸೇವೆ ಅನನ್ಯವಾಗಿದೆ ಇದೀಗ ಹೊಟೇಲ್ ಪ್ರಾರಂಭ ಒಂದು ಮೈಲುಗಲ್ಲು ಎಂದರು.
ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿ ಬೆಂಗಳೂರಿನ ಮಾದರಿಯಲ್ಲಿ ಹೊಟೆಲ್ ನಿರ್ಮಾಣ ಮಾಡಿರುವುದು ಜಗಳೂರಿನ ಹೆಮ್ಮೆಯಾಗಿದೆ ಶ್ರೀಯುತ ಬರ್ಕತ್ ಆಲಿ ಪ್ರತಿಯೊಬ್ಬರ ವಿಶ್ವಾಸ ಗಳಿಸಿ ಒಂದಲ್ಲ ಒಂದು ಸೇವಾ ಕಾರ್ಯ ಸಾರ್ತಕವಾಗಿದೆ.
ಈ ಸಂದರ್ಭದಲ್ಲಿ ಚಲಚಿತ್ರ ನಟಿ ಸಂಜನಾ . ಮಾಜಿ ಶಾಸಕ ಹೆಚ್ ಪಿ ರಾಜೇಶ್. ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ . ಮುಖಂಡ ಬಿಸ್ತುವಳ್ಳಿ ಬಾಬು .ಮುಖಂಡ ಕಲ್ಲೇಶ್ ರಾಜ್ ಪಟೇಲ್. ಮುಖಂಡ ಪೂಜಾರ್ ಸಿದ್ದಪ್ಪ ಸೇರಿದಂತೆ ಹಾಜುರಿದ್ದರು
ಜಿ ಕನ್ನಡ ಸರಿಗಮಪ ಖ್ಯಾತಿ ಕಂಬದ ರಂಗಯ್ಯ ತಂಡದಿಂದ ಅದ್ದೂರಿ ರಸಮಂಜರಿ ಕಾರ್ಯಕ್ರಮ ಜರುಗಿತು.

