ಪಲ್ಲಾಗಟ್ಟೆ ಗ್ರಾಪಂ ಅಧ್ಯಕ್ಷರಾಗಿ ಅವಿರೋಧವಾಗಿ ಬಿ.ವಿ. ವೀರೇಶ್ ಆಯ್ಕೆಯಾಗಿದ್ದಾರೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಹಾಗೂ ಚುನಾವಣೆ ಅಧಿಕಾರಿ ಶ್ವೇತಾ ಘೋಷಣೆ ಮಾಡಿದರು.
ಸುದ್ದಿ ಜಗಳೂರು.
ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಇತ್ತಿಚೀಗೆ ಕಾರಣಂತರದಿಂದ ಅಧ್ಯಕ್ಷರ ಸ್ಥಾನ ತೆರವಾಗಿತ್ತು ತೆರವಾದ ಸ್ಥಾನಕ್ಕೆ ಎಸ್ ಸಿ ಮೀಸಲು ಸಾಮಾನ್ಯ ಕ್ಷೇತ್ರದಿಂದ ಬಿ ವಿ ವೀರೇಶ್ ರವರು ಚುನಾವಣೆ ಕಣದಲ್ಲಿದ್ದರು ಇವರ ವಿರುದ್ದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಸುಮಾರು 21 ಜನ ಗ್ರಾಪಂ ಸರ್ವ ಸದಸ್ಯರು ಬೆಂಬಲ ಸಹಕಾರದಿಂದ ದಿನಾಂಕ 9_5_2025 ರಂದು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಜಯಗಳಿಸಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾರವರು ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷ ವೀರೇಶ್ ರವರಿಗೆ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಶುಭಾ ಕೋರಿದರು
ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಶ್ ಮಾತನಾಡಿ ಸರ್ವ ಸದಸ್ಯರ ಸಹಕಾರ ಅವರ ಬೆಂಬಲದಿಂದ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತೋಷವಾಗಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತ ಎಲ್ಲಾ ಗ್ರಾಮಗಳಿಗೂ ಸಹ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು .
ನೂತನ ಅಧ್ಯಕ್ಷರಿಗೆ ವಿವಿಧ ಮುಖಂಡರುಗಳು ಗ್ರಾಮಸ್ಥರು ಹೂವಿನ ಹಾರ ಹಾಕಿ ಶುಭಾ ಕೋರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೋಡೆ ಪ್ರಕಾಶ .ಭೋವಿ ಸಮಾಜದ ಅಧ್ಯಕ್ಷರಾದ ಅರ್ಜುನಪ್ಪ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಗುಮಾಸ್ತರಾದ ಮಂಜಣ್ಣ. . ಮಾಜಿ ಗ್ರಾಪಂ ಅಧ್ಯಕ್ಷರ ಪತಿ ಗುರುಮೂರ್ತಿ ಹನುಮಂತಪ್ಪ. ಶಿಕ್ಷಕರಾದ ಅಸಗೋಡು ಮೂರ್ತಿ ಗ್ರಾಪಂ ಉಪಾಧ್ಯಕ್ಷರಾದ ನಾಗರಾಜ್. ಗ್ರಾಪಂ ಮಾಜಿ ಅಧ್ಯಕ್ಷರು ರೇಣುಕಮ್ಮ. ಗ್ರಾಪಂ ಸದಸ್ಯರಾದ ಮಂಜಕ್ಕ. ಯಲ್ಲಮ್ಮ. ಎಸ್ ಎನ್ ಬಸವರಾಜ್.ರತ್ನಮ್ಮ. ಶೇಖರಪ್ಪ. ದಿವ್ಯಾ. ರಮೀಜಾ. ಕಲ್ಲೇಶ್. ಸಿದ್ದೇಶ್.ಬಿದ್ದಾಡಪ್ಪ. ವಿರೋಪಾಕ್ಷಪ್ಪ. ಹೊನ್ನಮ್ಮ.ಚಂದ್ರಮ್ಮ.ಸೇರಿದಂತೆ ಮುಂತಾದವರು ಹಾಜುರಿದ್ದರು.

