ಸಾಹಿತ್ಯ ಸಂಗಮ
ಶುಕ್ರದೆಸೆ ವಿಶೇಷ ಸಂಚಿಕೆ
ಶಿವಮೊಗ್ಗ ಶಿಲ್ಪಾವತಿ ರಚಿಸಿರುವ ಮೌನ ಮಾತದಾಗ ಚೊಚ್ಚಲ ಕವನ ಸಂಕಲನದ ಕೃತಿ ಬೆಂಗಳೂರು ಸಿಲಿಖಾನ್ ಸಿಟಿಯೊಂದರಲ್ಲಿ ವಿವಿಧ ಸಾಹಿತಿಗಳ.ಹಾಗೂ ಅನೇಕ ಕವಿಗಳ ವಿಶಿಷ್ಠ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳುತ್ತಿರುವುದು ಒಂದು ಸಂತೋಷದ ಸಂಗತಿ
ಸೌಮ್ಯ ಸ್ವಭಾವದ ಶ್ರೀಯುತೆ ಶಿಲ್ಪಾವತಿಯವರು ವೃತ್ತಿಯಲ್ಲಿ ಶಿಕ್ಷಕಿಯಾಗಿ ಪ್ರೌವೃತ್ತಿಯಲ್ಲಿ ಲೇಖಕಿಯಾಗಿ ಉತ್ಸಹದೊಂದಿಗೆ ವಿವಿಧ ಕಾರ್ಯಕ್ರಮ ಸಮಾರಂಭಗಳಿಗೆ ಭಾಗವಹಿಸುವ ಮೂಲಕ ನಾಡಿನ ಅಗ್ರಗಣ್ಯ ಸಾಧಕರೊಂದಿಗೆ ಗುರುತಿಸಿಕೊಂಡು ಸಾಹಿತ್ಯ ಲೋಕದಲ್ಲಿ ತನ್ನದೆಯಾದ ಛಾಪು ಮೂಡಿಸುತ್ತಿರುವ ಶ್ಲಾಘನೀಯವಾಗಿದೆ. ಶ್ರೀಯತೆ ಶಿಲ್ಪಾವತಿಯವರಿಗೆ ಆರೋಗ್ಯ ಸಮಸ್ಯೆಯಿದ್ದರು ಸಹ ಲೆಕ್ಕಿಸದೆ ಸಾಹಿತ್ಯ ಮತ್ತು ತನ್ನ ವೃತ್ತಿ ಪಾವಿತ್ರತೆಗೆ ಪ್ರಮಾಣಿಕ ಸೇವೆ ಸಲ್ಲಿಸುತ್ತಿರುವ ಶಿಲ್ಪಾವತಿಯವರಿಗೆ ಈ ಬಾರಿ ಶಿವಮೊಗ್ಗ ಜಿಲ್ಲೆಯ ಸಂಬಂಧಿಸಿದ ಶಿಕ್ಷಣ ಇಲಾಖೆ ಉತ್ತಮ ಶಿಕ್ಷಕರ ಪ್ರಶಸ್ತಿ ನೀಡಲಿ ಎಂದು ಆಶಿಸುವೆ ಮತ್ತು ಒತ್ತಾಯಿಸುವೆ.
ಇಂತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ
ಪತ್ರಕರ್ತರು
