ತಾಲ್ಲೂಕಿನ ಗೋಗುದ್ದು ಗ್ರಾಮದ ಅನುಷಾ ಗುಡಿಸಲಲ್ಲಿ ಅರಳಿದ ಪ್ರತಿಬೆ ಇಂಜಿನೀಯರಿಂಗ್ ಮುಗಿಸಿದ ವಿದ್ಯಾರ್ಥಿನಿ ಎಂ.ಟೆಕ್ (M.Tech) ವಿದ್ಯಾಬ್ಯಾಸಕ್ಕಾಗಿ ಸಹಾಯಸ್ತ ಚಾಚಿದ ವಾಣಿಜ್ಯೋದ್ಯಮಿಗಳಾದ ನಾಗವೇಣಕ್ಕ ಜೆ.ಪಿ ಓಬಣ್ಣ ಸಹಾಯಕ ಆಯುಕ್ತರಿಂದ ಹಣಕಾಸಿನ ನೆರವು
ಜಗಳೂರು ಸುದ್ದಿ
ಜಗಳೂರು ತಾಲ್ಲೂಕಿನ ಗೋಗುದ್ದು ಗ್ರಾಮದ ಶಿವಣ್ಣ ಶಿವಗಂಗಾಮ್ಮ ಎಂಬ ದಂಪತಿಗಳ ಪುತ್ರಿ ಅನುಷಾ ಎಂಬ ಯುವತಿಯ ಇಂಜಿನೀಯರಿಂಗ್ ಪದವಿ ಮುಗಿಸಿ ಪುನ ಮುಂದಿನ ವಿದ್ಯಾಬ್ಯಾಸಕ್ಕಾಗಿ ನೆರವು ನೀಡಿದ ಉದಾರ ಕೊಡುಗೈದಾನಿಗಳಾದ ಬೆಂಗಳೂರಿನ ವಾಣಿಜ್ಯೋದ್ಯಮಿಗಳಾದ ನಾಗವೇಣಕ್ಕ ಜೆ.ಪಿ ಓಬಣ್ಣರವರಿಂದ ಧನಸಹಾಯ ನೀಡಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸಿದರು.
- ಇತ್ತಿಚಿಗೆ ಯುವತಿ ಇಂಜಿನೀಯರ್ ಪದವಿ ಗಳಿಸಿ ಶೇ 85 ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ ಯುವತಿ ಕೆಲ ನೆರೆಹೊರೆಯವರ ಸಹಾಯದಿಂದ ಜಗಳೂರಿನ ವಾಣಿಜ್ಯೋದ್ಯಮಿಗಳಾದ ನಾಗವೇಣಕ್ಕ ಜೆ.ಪಿ ಓಬಣ್ಣ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಯುಕ್ತರನ್ನ ಭೇಟಿ ಮಾಡಿ ಯಾವುದಾದರು ಇಲಾಖೆಯಲ್ಲಿ ಕೆಲಸ ಕೊಡಿಸಿ ಎಂದು ನೇರವಾಗಿ ಕೇಳಿಕೊಂಡ ಸಂದರ್ಭದಲ್ಲಿ ಆಯುಕ್ತರು ಹಾಗೂ ಅವರ ಧರ್ಮಪತ್ನಿ ನಾಗವೇಣಕ್ಕ ಮುಂದಿನ ವಿದ್ಯಾಬ್ಯಾಸ ಮಾಡಲು ಧನಸಹಾಯ ನೀಡಿ ನಿನ್ನ ವಿದ್ಯಾಬ್ಯಾಸ ಮುಂದುವರೆಸು ಎಂದು ಪ್ರೋತ್ಸಾಹಿಸಿದರು.
ಅನೇಕ ಸಾಧಕರು ಸಹ ಬಡತನ ಬೇಗೆಯಲ್ಲಿಯೇ ಓದಿ ಸಾಧನೆಗೈದ ನಿರ್ದೇಶನಗಳು ಸಾಕುಷ್ಟಿವೆ ನಾನು ಒಬ್ಬ ಸಾಮಾನ್ಯ ನೌಕರನ ಮಗ ನಾನು ಕಷ್ಟಪಟ್ಟು ವಿದ್ಯಸಬ್ಯಾಸ ಮಾಡಿದ್ದರಿಂದ ನಾನು ಉನ್ನತ ಅಧಿಕಾರಿಯಾಗಿದ್ದೆನೆ .
ವಿದ್ಯಾರ್ಥಿಗಳು ಗುರಿ ಮುಟ್ಟುವ ತನಕ ನಿಲ್ಲದಿರು ಹಟ. ಚಲ .ವಿದ್ಯಾರ್ಥಿ ದಿಸೆಯಲ್ಲಿ ಆಳವಡಿಸಿಕೊಂಡು ಮುಂದಿನ ಎಂಟೆಕ್ ವಿದ್ಯಾಬ್ಯಾಸ ಮಾಡುವಂತೆ ಕಿವಿ ಮಾತು ಹೇಳಿ ಪ್ರೋತ್ಸಾಹಿಸಿದರು.
ನಿಮ್ಮ ತಂದೆ ತಾಯಿಗಳು ಕಷ್ಟಪಟ್ಟು ವಿದ್ಯಾಬ್ಯಾಸ ಕೋಡಿಸಿದ್ದಾರೆ ಯಾವುದಾದರು ಉದ್ಯೋಗ ಸಿಗುವವರೆಗೂ ಸ್ವರ್ಧಾತ್ಮಕ ಪರಿಕ್ಷೇ ಎದುರಿಸುವಂತೆ ತಿಳಿಸಿದರು ಪುನ ಯುವತಿಗೆ ನಮ್ಮ ಕೈಲಾದ ಸಹಾಯ ಮಾಡುತ್ತೆವೆ ಮುಂದಿನ ವಿದ್ಯಾಬ್ಯಾಸ ಮುಂದುವರೆಸಿ ಎಂದು ಹಣಕಾಸಿನ ನೆರವು ನೀಡಿ ವಿದ್ಯಾರ್ಥಿಗೆ ಶಾಲು ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ದಲಿತ ಮುಖಂಡ ಜಿ.ಎಚ್ ಮಹೇಶ್ ಗೋಪಾಲಪುರ .ರವಿಕುಮಾರ ಶಿವಾಗಂಗಾಮ್ಮ ಸೇರಿದಂತೆ ಹಾಜುರಿದ್ದರು.

