ಜಗಳೂರು ಬ್ರೇಕಿಂಗ್ ನ್ಯೂಸ್

7 ತಾಸು ವಿದ್ಯುತ್ ನೀಡುವಂತೆ ರೈತರು ಬೇಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮದ ರೈತರು ಬೆಸ್ಕಾಂ ಇಲಾಖೆಯ ಸಭ್ ಸ್ಟೇಷನ್ ನಗೆ ಮುತ್ತಿಗೆ ಹಾಕಿ 7 ತಾಸು ವಿದ್ಯತ್ ನೀಡುವಂತೆ ಆಗ್ರಹಿಸಿದ್ದಾರೆ .

ಪ್ರತಿಭಟನಾ ಸ್ಥಳಕ್ಕೆ ಬೆಸ್ಕಾಂ ಇಲಾಖೆ ಎಇಇ ಮಲ್ಲಿಕಾರ್ಜನ್ ಆಗಮಿಸಿ‌ ರಾತ್ರಿ ವೇಳೆ 3 ತಾಸು ಆಗಲು ವೇಳೆ 3 ತಾಸು ಒಟ್ಟು 6 ತಾಸು ಕರೆಂಟ್ ನೀಡುವುದಾಗಿ‌ ತಿಳಿಸುತ್ತಿದ್ದಂತೆ ಪ್ರತಿಭಟನೆಯಿಂದ ಹಿಂದೆ ಸರಿದ ರೈತರು

ಪ್ರತಿಭಟನೆ ಕುರಿತು ಮಾಜಿ ತಾಪಂ ಸದಸ್ಯರು .ಹೆಚ್ ಎನ್ ಬಸವರಾಜಪ್ಪ.ಮಾತನಾಡಿದರು ಬೇಸಿಗೆ ಅವಧಿಯಲ್ಲಿ
ರೈತರ ಬೆಳೆಗಳನ್ನ ಸಂರಕ್ಷಣೆ ಮಾಡಿಕೊಳ್ಳಲು ರೈತರ ಪಂಪಸೆಟ್ ಗಳಿಗೆ ಸರಿಯಾದ ರೀತಿ ವಿದ್ಯುತ್ ನೀಡಬೇಕು ರೈತರು ಸಾಲಸೂಲ ಮಾಡಿ ವಿವಿಧ ಬೇಸಿಗೆ ಬೆಳೆಯನ್ನ ಹಾಕಿರುತ್ತಾರೆ ಅಧಿಕಾರಿಗಳು ಕಣ್ಣಮುಚ್ಚಾಲೆ ಆಟ ಆಡದೆ ನಮಗೆ ವಿದ್ಯುತ್ ನೀಡುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ .ಹೆಚ್ ಟಿ ಶ್ರೀನಿವಾಸ ಮಾಜಿ ಗ್ರಾಪಂ ಅದ್ಯಕ್ಷರು .ಮಂಜಣ್ಣ.ಮಂಜುನಾಥ ಹೊನ್ನೂರಪ್ಪ.ಹಂಪಣ್ಣ ದೊಡ್ಡ ಭರತ್ .ಮಾಜಿ ಗ್ರಾಪಂ ಅದ್ಯಕ್ಷರು ಮೂಗಣ್ಣ .ಎಲ್ ತಿರುಮಲೇಶ್ .ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!