ಇಂದು ರಾಜಕಾರಣ ಅಷ್ಟೇ ಕೆಟ್ಟಿಲ್ಲ ಪ್ರಶಸ್ತಿಗಳೂ ಕೆಟ್ಟಿವೆ. ಪ್ರಶಸ್ತಿಗಾಗಿ ಲಾಬಿ ಮಾಡುವ ಮಂದಿ ಅದೆಷ್ಟೋ ಇದ್ದಾರೆ. ಅಂತಹವರ ನಡುವೆ ಹರೇಕಳ ಹಾಜಬ್ಬ ಅವರಿಗೆ ಭಾರತದ ಶ್ರೇಷ್ಠ ರಾಜಕಾರಣಿ, ರಾಜ್ಯ ಕಂಡ ಶ್ರೇಷ್ಠ ಮಾನವತಾವಾದಿ ಜೆ.ಇಮಾಂ ಸಾಹೇಬರ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿ ಅಕ್ಷರ ಸಂತನನ್ನು ಆಯ್ಕೆ ಮಾಡಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ.ಬಂಜಗೆರೆ ಜಯಪ್ರಕಾಶ್.
ಜಗಳೂರು ಸುದ್ದಿ :-ಅಂದಿನ ಮೈಸೂರು ಸಂಸ್ಥಾನದ ಮಂತ್ರಿ ಮಂಡಲದಲ್ಲಿ ವಿದ್ಯಾ ಮಂತ್ರಿ ಸೇರಿದಂತೆ ಒಂಭತ್ತು ಖಾತೆಗಳನ್ನು ನಿರ್ವಹಿಸಿದ ಜಗಳೂರಿನ ಜೆ.ಎಂ.ಇಮಾಂ ಸಾಹೇಬರು ವಿರೋಧ ಪಕ್ಷದ ನಾಯಕರಾಗಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ…
